ಪ್ರತಿಬಿಂಬ
ಜೀಕುತಿಹ ಜೋಕಾಲಿಗೆ
ನೇತು ಹಾಕುತ್ತಿದ್ದಾಗ
ಮುಗಿಲಿಗೆ ಮುಖವಾದೆ
ರವಿ ನೆತ್ತಿಗೇರಿದ್ದ ...ಸುಖವಾಗಿದ್ದ
ಸ್ತುತಿಯ ಆಕಾರವಲ್ಲ..
ಆದರೂ ಪಕ್ಕದ ಬಾವಿಯಲ್ಲಿ
ಕಂಡಿದ್ದ.....
ಸುಪ್ತನಾಗಿ ಇಬ್ಬನಿಯಲ್ಲೂ
ಅಡಗಿದ್ದ.....
ಸಂಜೆ ಗೌಜಿಯಲಿ ನಮ್ಮೂರ
ಓಣಿಯ ಬೇಲಿಯಾಚೆ ಮನೆ
ಮಾಡಿದ್ದ....
ಸಡ್ಡು ಹಿಡಿದವನಂತೆ ಮತ್ತೆ
ನರ್ಸಿ ಕೆರೆಯಲ್ಲಿ
ಮುಂಜಾನೆ ಪ್ರತ್ಯಕ್ಷನಾಗಿದ್ದ !
-ಅಕುವ
No comments:
Post a Comment