Saturday, September 1, 2012

ವಿಷಾದ


ವಿಷಾದ

ಓದು ಮುಗಿಸಿ ಕೆಲಸ ಗಿಟ್ಟಿಸಿ
ಚಿಂತೆಯಲ್ಲಿ ಮುಳುಗಿದ್ದ
ದಕ್ಷಿಣದ  ಹುಡುಗ...  !

ದಿನಾ ಒಂದೇ ಬೋಗಿಯಲಿ
ಮುಖ  ನೋಡಿ ನೋಡಿ
ಮುಗಳ್ನಾಕ್ಕಾಗ ...
ಒಂದು ದಿನ ಅರುಹಿಕೊಂಡ....

ಮದುವೆಗೆ ಹೆಣ್ಣು
ಗೊತ್ತು ಮಾಡಿದ್ದಾರೆ....
ಅಪ್ಪ ಅಮ್ಮನ ಒಟ್ಟಿಗಿರಲು
ಅವಳೊಪ್ಪಲ್ಲ......!
ಹಣದ ತೊಂದರೆ ಅಲ್ಲ !
ಒಟ್ಟಿಗೆ  ಇರೋದೆ ಬೇಡ !

ಅವಿಭಕ್ತ ನಮ್ಮಲ್ಲೇ ನೋಡಿ
ಗಂಡಿಗೆ ಅಪ್ಪ ಅಮ್ಮ ಇರಬಾರದು !
ಇದ್ರು ಮದುವೆ ಮುಂಚೆ
ಸಾಯಿಸಬೇಕು! ಸಾಯಬೇಕು !
ಇಲ್ಲಾಂದ್ರೆ ಮದುವೆ ಬೇಡ
ಸುಮ್ಮಗಿರಬೇಕು !

ನಾನು ಏನು ಹೇಳದೆ ಮೌನ
ಸುತ್ತಮುತ್ತ ಇದೇ ಎಲ್ಲಾ !

-ಅಕುವ
(ಮೊನ್ನೆ ರೈಲ್ಲಿನಲ್ಲಿ  ನನ್ನ  ಸಹಪ್ರಯಾಣಿಕ  ಆಂಧ್ರ ಯುವಕನೊಬ್ಬನ ವಿಷಾದದ ಮಾತಿನಿಂದ  ಹುಟ್ಟಿದ ಕವನ.  ನಮ್ಮ ಸಂಭಾಷಣೆಯ ಭಾಷೆಯನ್ನೇ  ಉಪಯೋಗಿಸಿದ್ದೇನೆ.)

No comments:

Post a Comment