ವಿಷಾದ
ಓದು ಮುಗಿಸಿ ಕೆಲಸ ಗಿಟ್ಟಿಸಿ
ಚಿಂತೆಯಲ್ಲಿ ಮುಳುಗಿದ್ದ
ದಕ್ಷಿಣದ ಹುಡುಗ... !
ದಿನಾ ಒಂದೇ ಬೋಗಿಯಲಿ
ಮುಖ ನೋಡಿ ನೋಡಿ
ಮುಗಳ್ನಾಕ್ಕಾಗ ...
ಒಂದು ದಿನ ಅರುಹಿಕೊಂಡ....
ಮದುವೆಗೆ ಹೆಣ್ಣು
ಗೊತ್ತು ಮಾಡಿದ್ದಾರೆ....
ಅಪ್ಪ ಅಮ್ಮನ ಒಟ್ಟಿಗಿರಲು
ಅವಳೊಪ್ಪಲ್ಲ......!
ಹಣದ ತೊಂದರೆ ಅಲ್ಲ !
ಒಟ್ಟಿಗೆ ಇರೋದೆ ಬೇಡ !
ಅವಿಭಕ್ತ ನಮ್ಮಲ್ಲೇ ನೋಡಿ
ಗಂಡಿಗೆ ಅಪ್ಪ ಅಮ್ಮ ಇರಬಾರದು !
ಇದ್ರು ಮದುವೆ ಮುಂಚೆ
ಸಾಯಿಸಬೇಕು! ಸಾಯಬೇಕು !
ಇಲ್ಲಾಂದ್ರೆ ಮದುವೆ ಬೇಡ
ಸುಮ್ಮಗಿರಬೇಕು !
ನಾನು ಏನು ಹೇಳದೆ ಮೌನ
ಸುತ್ತಮುತ್ತ ಇದೇ ಎಲ್ಲಾ !
-ಅಕುವ
(ಮೊನ್ನೆ ರೈಲ್ಲಿನಲ್ಲಿ ನನ್ನ ಸಹಪ್ರಯಾಣಿಕ ಆಂಧ್ರ ಯುವಕನೊಬ್ಬನ ವಿಷಾದದ ಮಾತಿನಿಂದ ಹುಟ್ಟಿದ ಕವನ. ನಮ್ಮ ಸಂಭಾಷಣೆಯ ಭಾಷೆಯನ್ನೇ ಉಪಯೋಗಿಸಿದ್ದೇನೆ.)
No comments:
Post a Comment