ಮರಳ ಹೆಜ್ಜೆ
ಭಾರ ಬಿದ್ದಷ್ಟು ಹೂತು ಹೋಗಿದೆ
ಹೊರಲಾರೆ ಎಂದಿದೆ ಹೊಯ್ಗೆ ರಾಶಿ
ದಾಪುಗಾಲು ಹಾಕಲಾಗಲಿಲ್ಲ
ನಡೆಯದೆ ನನಗೆ ದಾರಿಯಿಲ್ಲ
ಕಂಡದ್ದು ಮುಗಿಲು ಇಳಿಯುವವರೆಗೆ
ಜಲ ಮುತ್ತುತಿತ್ತು ಆಗಸಕೆ
ದಿಗ್ಭ್ರಮೆ! ಜಗತ್ತು ಅಲ್ಲೇ ಕೊನೆಗೊಂಡಿದೆ.
ಮತ್ತೂ ಎವೆಯಿಕ್ಕದೆ ನೋಡುತ್ತಲೇ ಇದ್ದೆ.
ಉಪ್ಪು ನೀರು ಪಾದ ಮುಟ್ಟುತಿತ್ತು
ಮತ್ತೆ ಮೇಲೆ ಹಜ್ಜೆ ಹಾಕಿದೆ
ಉಸುಕು ಪಾದ ಕಳಚಿಕೊಳ್ಳುತಿತ್ತು
ಮುಸುಕು ಬೆಳಕ ಓಡಿಸಿತ್ತು .
- ಅಕುವ
No comments:
Post a Comment