Tuesday, January 21, 2014

ಸಂಘರ್ಷ

ಸಂಘರ್ಷ 

ಇಂದು ನಿನ್ನೆಗಳದಲ್ಲ ಇದು 
ಹುಟ್ಟು ಸಾವೆಂಬ ಭವ -ಭಯ 
ಮೊಳಕೆಗೆ ಝರಿ ನೀರಲಿ 
ಕೊಳೆಯುವ ಕಳೆಯುವ ಅಂಜಿಕೆ  

ಮೊಣಕಾಲೂರಿ ದೈನನಾಗಿ 
ಪ್ರಪಂಚ ನೋಡಿದಂದಿನಿಂದ 
ಸಾಧನೆಯ ಹುಚ್ಚು ಮೇಲೇರುವ ಕೆಚ್ಚು 
ಅಂದೇ ಶುರುವಾಯಿತು ನೋಡಿ ಸಂಘರ್ಷ !

ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು 
ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು 
ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು 
ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !

ಬೇಸರಾಗಿ  ಬೇಡದ  ಜೀವಕ್ಕೆ  
 ಸಮಾಜ ಕಟ್ಟಿದ್ದ ಸಂಗಾತಿ 
ಹೊಸ ಜೀವ ಹೊಸ ಮೋಡಿ 
ಬೆಂಬಿಡದ ಸಂಸಾರ ಮತ್ತೊಂದು ಸಂಘರ್ಷ !

ಸುಸ್ತಾಗಿ ದುಸ್ತರದಿ ಸುಮ್ಮನಿರಲು 
ಮುತ್ತಿಟ್ಟ ನಿವೃತ್ತಿ ! 
ಬೆಂಬಿಡೆನೆಂದು ಮತ್ತೆ ಹಿಂಬಾಲಿಸಿದೆ 
ಜೀವನವನ್ನು ರೂಪುಗೊಳಿಸಿದ .... 
ಸ್ವರೂಪಗಳ ಬದಲಿಸಿ ನಿಂತ ಅದೇ ಸಂಘರ್ಷ  !!


-  ಅಶೋಕ್ ಕುಮಾರ್ ವಳದೂರು ( ಅಕುವ )

No comments:

Post a Comment