Saturday, July 5, 2014

ಒಂಟಿ ಕಾಲಿನ ಕಾಗೆ

ಒಂಟಿ ಕಾಲಿನ ಕಾಗೆ 

ಏಕಾಂತ ಭಂಗ ಮಾಡಿ 
ತಪ್ಪಸ್ಸಿಗೆ  ನಿಂತಿದ್ದ ಹಾಗೆ 
ಒಮ್ಮೆಲೇ ತಪದಿಂದ  ಹೊರಗೆ 
ಎಳೆದಂತೆ !

ಪಿತೃಪಕ್ಷದ ಬೆಳಗಿನ ಹೊತ್ತು 
ಇನ್ನೂ ಗೂಡಿನ ಕದ ತೆರೆದಿಲ್ಲ 
ಒಂಟಿಕಾಲಿನಲ್ಲೇ ತಪ ಮಗ್ನ 
ನನ್ನ ಕಾಣುತ್ತಲೇ 
ಪರಿಚಯಿಸಿಕೊಂಡ !

ಏನೋ ಹೇಳಬೇಕಿತ್ತದಕ್ಕೆ 
ಮೌನವನ್ನೇ ಧರಿಸಿದ್ದ!
ಛಲ ಬಿಡದಿ ಸನ್ಯಾಸಿ 
ನನ್ನನ್ನೇ ದಿಟ್ಟಿಸುತ್ತಿದ್ದ !

ಬೆಂಕಿಯ ಉಗುಳು 
ದುಃಖದ ಜ್ವಾಲಾಗ್ನಿಯು !
ಹತ್ತಿರಕ್ಕೆ ಹೋಗಿ ಒಮ್ಮೆ 
ನೇವರಿಸಿದೆ !

ಹೇಳದೆ ಊರು ಬಿಟ್ಟಿದ್ದಕ್ಕೆ 
ಕುಪಿತನಾಗಿದ್ದ!
ಇಂದೂ ಅಲುಗದೆ ಒಂಟಿ ಕಾಲಲಿ 
ನಿಂತಿದ್ದಾನೆ !!

-ಅಕುವ ( ಅಶೋಕ್ ಕುಮಾರ್ ವಳದೂರು )

No comments:

Post a Comment